ಇದೇ ರಾಗದಲ್ಲಿ

ಶ್ರಾವಣ ಬಂತು
ಡಾ|| ರಾಜ್ ಕುಮಾರ್
ಚಿ. ಉದಯಶಂಕರ್
ರಂಗರಾವ್

ಇದೇ ರಾಗದಲ್ಲಿ ಇದೇ ತಾಳದಲ್ಲಿ

ರಾಧೆಗಾಗಿ ಹಾಡಿದ ನೀಲ ಮೇಘ ಶ್ಯಾಮ|| ಪ ||

ಆ ಯಮುನೆಯಲ್ಲಿ ಅಲೆ ಅಲೆಯು ಹೊಮ್ಮಿ

ಸಂತೋಷದಿಂದ ಬಾನೆಡೆಗೆ ಚಿಮ್ಮಿ

ಆ ಇರುಳಿನಲಿ ಆ ನೀರಹನಿ ಕಾಲ್ಗೆಜ್ಜೆ ದನಿ ಮಾಡಿರಲು

ಬೆರಗಾದ ಚಂದ್ರನು ಮೈ ಮರೆತು ಹೋದನು|| 1 ||>

ಮಧು ಮಾಸವೆಂದು ಮಾಮರವು ತೂಗಿ

ಕೋಳಲಂತೆ ಆಗ ಕೋಗಿಲೆಯೂ ಕೂಗಿ

ಆಕಾಶದಲಿ ತೇಲಾಡುತಿಹ ಆ ಮೋಡಗಳು ಬೆರಗಾಗಿ

ಕಾಲ ಮರೆತು ಹೋದವು ಭುವಿಗೆ ಜಾರಿ ಬಂದವು|| 2 ||

ಶ್ರಾವಣ ಬಂತು

ಚಿತ್ರ ನೋಡಿ